UDAYAVANI NEWS
ಮಸ್ಕಿ, ಡಿಸೆಂಬರ್ 07 : ಬೆಂಗಳೂರಿನಿಂದ ಮಸ್ಕಿ ಮಾರ್ಗವಾಗಿ ಲಿಂಗಸ್ಗೂರಿಗೆ ತೆರಳುವ ವೇಳೆ ತಡ ರಾತ್ರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೀಸಲು ಲಿಂಗಸ್ಗೂರು ವಿಧಾನ ಸಭಾ ಕ್ಷೇತ್ರದ ಶಾಸಕ ಆಕಾಂಕ್ಷಿ ಹನುಮಂತಪ್ಪ ಆಲ್ಕೋಡ್ ಕಾಂಗ್ರೆಸ್ಸ್ ಮುಖಂಡರುಗಳ ಸಮ್ಮುಖದಲ್ಲಿ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಬೆಂಗಳೂರಿನಿಂದ ಮಸ್ಕಿ ಮಾರ್ಗವಾಗಿ ಲಿಂಗಸ್ಗೂರಿಗೆ ತೆರಳುವ ವೇಳೆ ತಡರಾತ್ರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಕಾಲಿಕ ಕೆಲ ಕಾಂಗ್ರೆಸ್ಸ್ ಮುಖಂಡರುಗಳೊಂದಿಗೆ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸುತ್ತಾ
ಎ ಐ ಸಿ ಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹನುಮಂತಪ್ಪ ಆಲ್ಕೋಡ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ
ದೊಡ್ಡಪ್ಪ ಮುರಾರಿ, ದಾನಪ್ಪ ಸಿ ನಿಲೋಗಲ್ ದಲಿತ ಸಾಹಿತಿ,ರಾಮಣ್ಣ ಗವಿಗಟ್ಟ ಉದ್ಬಾಳ,ಅಮತೇಶಪ್ಪ ಖಾನಾವಳಿ, ಆನಂದ ಉಪನ್ಯಾಸಕರು ಪರಾಪುರ, ಬಸವರಾಜ ಉದ್ಬಾಳ,ಹುಲುಗಪ್ಪ ಉಪನ್ಯಾಸಕರು ಗೋನಾಳ, ಬಸವರಾಜ ರಂಗಾಪುರ,ಮೌನೇಶ್ ಬಡಿಗೇರ್ ಚಿಕ್ಕ ಕಡಬೂರು, ಸಿದ್ದು ಮುರಾರಿ,ಸದ್ದಾಂ ಮಸ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು