ಕಾಂಗ್ರೆಸ್ ಯುವ ನಾಯಕಿ ವಿದ್ಯಾ ಹಿರೇಮಠರಿಂದ ಉಚಿತ ಮಾತ್ರೆ ವಿತರಣೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಡಿಸೆಂಬರ್ 10 : ರಾಜಾಜಿನಗರದ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾದ ಎಸ್ ಎಸ್ ಹಿರೇಮಠ ರವರಿಂದ ಉಚಿತ ಮೂಳೆ ಸಾಂದ್ರತೆ ಪರೀಕ್ಷೆ ಮಾಡಲಾಗಿದ್ದು, ಕಾಂಗ್ರೇಸ್ ಯುವ ನಾಯಕಿ ಕುಮಾರಿ ವಿದ್ಯಾ ಹಿರೇಮಠರಿಂದ ಚಿಕಿತ್ಸೆಗೊಳಪಟ್ಟವರಿಗೆ ಹಾಗೂ ಮೂಳೆ ಸಂಬಂಧಿ ನೋವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಉಚಿತ ಮಾತ್ರೆಗಳನ್ನು ವಿತರಣೆ ಮಾಡಿದರು. ಈ ಸೇವೆಯನ್ನು ಪಡೆದ ಮೂಳೆ ಸಂಬಂಧಿ ನೋವಿನಿಂದ ಬಳಲುತ್ತಿರುವ ಸರ್ವ ಸಾರ್ವಜನಿಕರು ಉಚಿತ ಮಾತ್ರೆ ವಿತರಿಸಿದ ಕಾಂಗ್ರೆಸ್ ಯುವ ನಾಯಕಿ ವಿದ್ಯಾ ಹಿರೇಮಠ ರವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Post a Comment

Previous Post Next Post