UDAYAVANI NEWS
ಕಡೂರು, ಏಪ್ರಿಲ್ 10 : ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ವೈ.ಎಸ್.ವಿ.ದತ್ತಾ - ಸ್ವಾಭಿಮಾನಿ ಸಭೆಯಲ್ಲಿ ಹರಿದು ಬಂದ ವೈ. ಎಸ್. ವಿ ದತ್ತಾ ಅಭಿಮಾನಿಗಳು - ಆರ್ಥಿಕ ಸಂಪನ್ಮೂಲ ಕ್ರೋಡಿಕರಣ ಮಾಡಿ ಚುನಾವಣೆ ವೆಚ್ಚ ಭರಿಸುವುದಾಗಿ ವೈ. ಎಸ್. ದತ್ತ ಅಭಿಮಾನಿಗಳು - ಸ್ವಾಭಿಮಾನಿ ಸಭೆಗೆ ಹರಿದು ಬಂದ ಅಭಿಮಾನಿಗಳ ಸಾಗರ ವೀಕ್ಷಣೆ ಮಾಡಿ ಕೊಂಚ ಕಾಲ ಬಾವುಕರಾದ ವೈ.ಎಸ್.ವಿ.ದತ್ತಾ
ಕರ್ನಾಟಕ ವಿಧಾನಸಭಾ ಚುನಾವಣೆ - 2023 ರ ಚುನಾವಣೆಯಲ್ಲಿ ಕಡೂರು ಚುನಾವಣಾ ಅಭ್ಯರ್ಥಿಯಾಗಿ ಜನಪ್ರಿಯ, ಜನಸ್ನೇಹಿ, ಪ್ರಾಮಾಣಿಕ, ಜನಪರ ರಾಜಕಾರಣಿ ವೈ ಎಸ್. ವಿ. ದತ್ತ ರವರು ಕಡೂರಿನಲ್ಲಿ ಈ ದಿನ ನಡೆದ " ಸ್ವಾಭಿಮಾನಿ ಸಭೆ " ಯಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ವೈ. ಎಸ್. ವಿ. ದತ್ತ ರವರ ಅಭಿಮಾನಿಗಳ ಜನ ಸಾಗರ ನೋಡಿ ಕೊಂಚ ಕಾಲ ಬಾವುಕರಾದರು.
ಆರ್ಥಿಕ ಸಂಪನ್ಮೂಲಗಳ ಕೊರತೆ ಹೊಂದಿರುವ ವೈ. ಎಸ್. ವಿ. ದತ್ತ ರವರ ಬಗ್ಗೆ ಮಾಹಿತಿ ಅರಿತ ಅಭಿಮಾನಿಗಳು ಚುನಾವಣೆ ವೆಚ್ಚ ಭರಿಸಲು ಅಭಿಮಾನಿಗಳೇ ದೇಣಿಗೆ ರೂಪದಲ್ಲಿ ವೈ. ಎಸ್. ವಿ. ದತ್ತರವರೂ ಧರಿಸಿದ್ದ ಟವೆಲ್ ಗೆ ಹಾಕಿ, ಅಭಿಮಾನಿಗಳು ನಿಮ್ಮ ಜೊತೆಗೆ ನಾವಿದ್ದೇವೆ ಈ ಬಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವಂತೆ ಸ್ವಾಭಿಮಾನಿ ಸಭೆಯಲ್ಲಿ ಅಭಿಮಾನಿಗಳು ಅದರಲ್ಲೂ ಮಹಿಳೆಯರೂ ಸಹ ಮನವಿ ಮಾಡಿದರು.
ನನ್ನದು ಈ ಟವೆಲ್ ಗುರುತು ಚುನಾವಣಾ ಚಿಹ್ನೆಯಾಗಿ ಪಡೆಯುವೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಖಚಿತ - ತಾವೆಲ್ಲರೂ ಗೆಲ್ಲಿಸಲು ಸಹಕರಿಸಿ ಎಂದು ಸ್ವಾಭಿಮಾನಿ ಸಭೆಯಲ್ಲಿ ನುಡಿದ ವೈ. ಎಸ್. ವಿ. ದತ್ತ
ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಯಾರಿಗೆ ಆಯ್ಕೆ ಮಾಡಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
Tags
ಜಿಲ್ಲಾ ಸುದ್ದಿಗಳು