ಬಿಜೆಪಿ ಅಧ್ಯಕ್ಷ ಮಿಥುನ್ ರೆಡ್ಡಿ CPI(M) ಸ್ಥೂಪ‌ ಪ್ರತಿಷ್ಟಾಪನೆ ಮಾಡಿರುವುದು ಹಾಸ್ಯಾಸ್ಪದ - ಡಾ.ಮಧು ಸೀತಪ್ಪ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬಾಗೇಪಲ್ಲಿ, ಫೆಬ್ರವರಿ 02 : ಪಟ್ಟಣದಲ್ಲಿ ದಿ.ಕಾ‌ ಜಿ.ವಿ ಶ್ರೀರಾಮರೆಡ್ಡಿ ಅವರ ಸ್ತೂಪ ಕಟ್ಟಲು ಪ್ರಜಾ ಸಂಘರ್ಷ ಸಮಿತಿಯ ನಾಯಕರು ಆಯೋಜಿಸಲಾಗಿದ್ದು ಒಬ್ಬ ಬಿಜೆಪಿ ಅಧ್ಯಕ್ಷ CPI (M) ನ‌ ಹೋರಾಟದ ಚಿಹ್ನೆಯ‌ ಸ್ತೂಪವನ್ನು‌ ನಿರ್ಮಿಸಲು‌ CPI(M) ಪಕ್ಷದ ಅನುಮತಿ ಕೇಳಿದ್ದಾರೋ ಅಥವಾ ಇಲ್ಲವೋ‌ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಸ್ವಾಭಿಮಾನಿ ಜಿ ವಿ ಎಸ್ ಬಳಗದ ಸಂಚಾಲಕರಾದ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಗಳಾದ ಡಾಕ್ಟರ್ ಮಧು ಸೀತಪ್ಪ ರವರು ಪ್ರಶ್ನೆ ಮಾಡಿದ್ದಾರೆ.
ಸ್ತೂಪದಲ್ಲಿ ನಕ್ಷತ್ರ ಇಲ್ಲದಿರುವುದು ಒಳ್ಳೆಯದು.‌ಆದರೆ ಸುತ್ತಿ ಕೊಡಲು ಗುರುತು CPI (M) ನ‌ ಹೋರಾಟದ ಗುರುತು.‌ ಸ್ತೂಪವನ್ನು ಬೆಳಂದೂರು ವಾರ್ಡ್ ಬಿಜೆಪಿ ಅಧ್ಯಕ್ಷ ಮಿಥುನ್ ರೆಡ್ಡಿ ಸಿಪಿಐಎಂ ಸ್ತೂಪ ಪ್ರತಿಷ್ಟಾಪನೆ ಮಾಡುವುದು ಹಾಸ್ಯಾಸ್ಪದ ಹಾಗೂ ಪಿಎಸ್ಎಸ್ ಪಕ್ಷವನ್ನು ತಮ್ಮ ಸ್ವಾರ್ಥಕ್ಕಾಗಿ ಮಾರಾಟಕಿಟ್ಟ ಚನ್ನರಾಯಪ್ಪನಿಗೆ ನಾಚಿಕೆಯಾಗಬೇಕು ಎಂದರು ಈ ಪ್ರಶ್ನೆಗೆ CPI(M) ಉತ್ತರ ಕೊಡದಿದ್ದಲ್ಲಿ ಇವರೂ ಸಹಾ ಬಿಜೆಪಿ ಜೊತೆ ಶಾಮೀಲಾಗಿದ್ದಾರೆಂದು ಗೋಚರಿಸುತ್ತದೆ ಎಂದು ಸ್ವಾಭಿಮಾನಿ ಪಿ ಎಸ್ ಎಸ್ ಬಳಗದ WhatsApp ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post