UDAYAVANI NEWS
ಮಸ್ಕಿ, ಫೆಬ್ರುವರಿ 07 : ಪಟ್ಟಣದ ಬಸವೇಶ್ವರ ನಗರದ ತಹಶೀಲ್ ಕಛೇರಿ ಮುಂಭಾಗ ಲಿಂಗಸುಗೂರು ತಾಲೂಕಿನ ವಿಸಿಬಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹಿಸಿ ಸೋಮವಾರ ಮುಂಭಾಗ ಗ್ರೇಡ್ 2 ತಹಶೀಲ್ದಾರ್ ಷಣ್ಮುಖಪ್ಪ ಮಾನವಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಲಿಂಗಸುಗೂರು ತಾಲೂಕಿನ ವಿಸಿಬಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಗ್ರೇಡ್ 2 ತಹಶೀಲ್ದಾರ್ ಷಣ್ಮುಖಪ್ಪ ಮಾನವಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ
ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಮಸ್ಕಿ ಮೌನೇಶ್ ತುಗ್ಗಲದಿನ್ನಿ ತಾಲೂಕ ಸಂಚಾಲಕರು,ದಲಿತ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳಾದ ಹನುಮಂತ, ಸುನಿಲ್, ಜಿ. ಗಣೇಶ, ಕಿರಣ ಕುಮಾರ, ಮೌನೇಶ, ಯಂಕನಗೌಡ,ಕಾರ್ತಿಕ್, ಪಂಪಾಪತಿ,ಯಲ್ಲಪ್ಪ, ಹನುಮೇಶ, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು