UDAYAVANI NEWS
ಜೇವರ್ಗಿ, ಮಾರ್ಚ್ 05 : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಶಾಬಾದ್ ಗ್ರಾಸ್ ಹತ್ತಿರ ರಸ್ತೆ ಅಪಘಾತ ಸಂಭವಿಸಿದೆ.
ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಾಗಿದು ಈ ಅಪಘಾತವು ಜೇವರ್ಗಿ ಕಡೆಯಿಂದ ಕಲ್ಬುರ್ಗಿ ಕಡೆ ಹೊರಟಿರುವ ಲಾರಿ ಎಂ ಹೆಚ್ 12ಎಫ್ ಝೆಡ್ 9359 ಲಾರಿ ಮತ್ತು ಕಲಬುರ್ಗಿಯಿಂದ ಬರುತ್ತಿರುವ ಕೆಎ 32 ಎಫ್ 2283 ಬಸ್ ನಡುವೆ ಸಂಭವಿಸಿದೆ ಲಾರಿ ಚಾಲಕ ಮತ್ತು ಕ್ಲಿನರ್ ಗೆ ಗಂಭಿರ ಗಾಯವಾಗಿವೆ ಹಾಗೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನಿಸಲಾಗಿದೆ.ಅನೇಕ ಬಸ್ಸನಲ್ಲಿ ಇದ್ದರು ಗಾಯಗೊಂಡಿದ್ದಾರೆ.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags
ಜಿಲ್ಲಾ ಸುದ್ದಿಗಳು